Slide
Slide
Slide
previous arrow
next arrow

ವಿದ್ಯಾರ್ಥಿ ಸಾವು; ಮರಳು ಟಿಪ್ಪರ್ ವಶಕ್ಕೆ

300x250 AD

ಹೊನ್ನಾವರ: ಕಳೆದ ಶುಕ್ರವಾರ ರಾತ್ರಿ ಕರಿಕುರ್ವ ಸೇತುವೆ ಹತ್ತಿರ ನಡೆದ ಅಪಘಾತದಲ್ಲಿ ಮರಳು ತುಂಬುವ ಕೆಲಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆಗೆ ಸಂಬAಧ ಪಟ್ಟಂತೆ ಅಪಘಾತಕ್ಕೆ ಕಾರಣ ಎನ್ನಲಾದ ಟಿಪ್ಪರ್ ನ್ನು ಪೊಲೀಸರು ರವಿವಾರ ವಶಕ್ಕೆ ಪಡೆದಿದ್ದಾರೆ.

ಕರಿಕುರ್ವ ಸೇತುವೆ ಹತ್ತಿರವಿರುವ ಮರಳು ಸೈಟ್ ನಲ್ಲಿ ಲಾರಿಗೆ ಮರಳು ತುಂಬುವ ಕೆಲಸಕ್ಕೆ ಹೋಗಿದ್ದ ನಾಲ್ಕು ಜನರಲ್ಲಿ ಅಳ್ಳಂಕಿ ಕಾಲೇಜು ವಿದ್ಯಾರ್ಥಿ ದರ್ಶನ ಗೌಡ ಟಿಪ್ಪರ್ ಅಪಘಾತಕ್ಕೆ ಸ್ಥಳದಲ್ಲೇ ಅಸುನೀಗಿದ್ದ. ಅಪಘಾತ ಪಡಿಸಿದ ಟಿಪ್ಪರ್ ಕೆ.ಎ-19/ಎ.ಡಿ5898 ಇದರ ಚಾಲಕ ಅರೋಪಿ ಮಾರುತಿ ಗೌಡ ಕೇರಿಮನೆ, ಮಾವಿನಕುರ್ವಾ ಇತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿನ ಮಾದೇವ ಗೌಡ ಮರಬಳ್ಳಿ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೋಲಿಸರು ವಾಹನ ವಶಕ್ಕೆ ಪಡೆದಿದ್ದಾರೆ. ಚಾಲಕನನ್ನು ಕರೆತಂದು ವಿಚಾರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

300x250 AD
Share This
300x250 AD
300x250 AD
300x250 AD
Back to top